ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ಪುಸ್ತಕ ಪ್ರಾಧಿಕಾರ ಬೆಂಗಳೂರು ಇವರು ಪ್ರಕಾಶನ ಮತ್ತು ಸಂಬಂಧಿತ ಪ್ರಕ್ರಿಯೆಗಳನ್ನು ಉತ್ತೇಜಿಸುವ ಉದ್ದೇಶದಿಂದ ಪ್ರತಿ ವರ್ಷ ಕನ್ನಡ ಪುಸ್ತಕ ಸೊಗಸು ಬಹುಮಾನವನ್ನು ಪ್ರಖ್ಯಾಪಿಸಿ ಉತ್ತಮ ಗುಣಮಟ್ಟ ತೋರಿದವರನ್ನು ಗುರುತಿಸಿ ಗೌರವಿಸುತ್ತಾ ಬಂದಿದೆ. 2023 ನೇ ಸಾಲಿನ ಪ್ರತಿಷ್ಠಿತ ಬಹುಮಾನ ವಿತರಣೆ ಬೆಂಗಳೂರಿನಲ್ಲಿ ಕಳೆದ ಮಂಗಳವಾರ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಿತು. ಈ ಬಹುಮಾನಕ್ಕೆ ಮಂಗಳೂರಿನ ಕಥಾಬಿಂದು ಪ್ರಕಾಶನ ಈ ಪ್ರಶಸ್ತಿಗೆ ಭಾಜನವಾಯಿತು. ಕಥಾ ಬಿಂದುವಿನ ಸಂಸ್ಥಾಪಕರಾದ ಪಿ ವಿ ಪ್ರದೀಪ್ ಕುಮಾರ್ ಗಣ್ಯರಿಂದ ಬಹುಮಾನವನ್ನು ಸ್ವೀಕರಿಸಿದರು.
ಈ ಬಹುಮಾನ ಬಿಜಾಪುರದ ಶಿಕ್ಷಕಿ ಪರ್ವೀನ್ ಬಾನು ಅವರ ಬಾಲಮಂದಾರ ಮಕ್ಕಳ ಕವನ ಕೃತಿಯ ಪ್ರಕಾಶನದ ಗುಣಮಟ್ಟಕ್ಕೆ ನೀಡಲಾಗಿದೆ.
Comments (0)
Post Comment
Report Abuse
Be the first to comment using the form below.