ಕಥಾಬಿಂದು ಪ್ರಕಾಶನ ಸಂಸ್ಥೆಯು ಕಳೆದ 18 ವರ್ಷಗಳಿಂದ ಕನ್ನಡ ಸಾಹಿತ್ಯ ಕೃತಿಗಳನ್ನು ಪ್ರಕಟಿಸುವುದರ ಜೊತೆಗೆ ಸಾಹಿತ್ಯಾತ್ಮಕ ಕಾರ್ಯಕ್ರಮವನ್ನು ಮಲೇಶಿಯಾ, ಥೈಲೆಂಡ್, ದುಬೈ, ನೇಪಾಳ, ಹಾಗೂ ಕಾಶಿ, ಮುಂಬೈ, ಬೆಂಗಳೂರು, ಮಂಗಳೂರು ಹೀಗೆ ನಾನಾ ಕಡೆಯಲ್ಲಿ ಕೃತಿಗಳ ಬಿಡುಗಡೆ, ಕವಿಗೋಷ್ಠಿ, ಸಾಧಕರಿಗೆ ಪ್ರಶಸ್ತಿ ಸನ್ಮಾನಗಳನ್ನು ಯಶಸ್ವಿಯಾಗಿ ನಡೆಸಿಕೊಂಡು ಬಂದಿದೆ. ಈ ವರ್ಷ 18ನೇ ವಾರ್ಷಿಕೋತ್ಸವ ಹಾಗೂ ಸಾಹಿತ್ಯೋತ್ಸವ ಮತ್ತು 17 ಕೃತಿಗಳ ಬಿಡುಗಡೆಯ ಕಾರ್ಯಕ್ರಮವನ್ನು ಅಕ್ಟೋಬರ್ 26 ರಂದು ವಿದ್ಯಾರತ್ನ ಆಂಗ್ಲ ಮಾಧ್ಯಮ ಶಾಲೆ ದೇರಳ ಕಟ್ಟೆ..... ಇಲ್ಲಿ ಬೆಳಿಗ್ಗೆ 10ಗಂಟೆಗೆ ಉದ್ಘಾಟನೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಗಲಿದೆ. ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು ಮಾಜಿ ಕ.ಸಾ.ಪ ರಾಜ್ಯಾಧ್ಯಕ್ಷರು ಇವರ ಅಧ್ಯಕ್ಷತೆಯಲ್ಲಿ ಶ್ರೀ ರವೀಂದ್ರ ಶೆಟ್ಟಿ ಉಳಿದೊಟ್ಟು ಉಪಾಧ್ಯಕ್ಷರು, ಬಿಜೆಪಿ, ದ.ಕ ಜಿಲ್ಲೆ ಇವರು ಉದ್ಘಾಟನೆಯ ನಂತರ ಶ್ರೀ ಪಿ. ವಿ. ಪ್ರದೀಪ್ ಕುಮಾರ್, ಲೇಖಕ, ಕಾದಂಬರಿಕಾರ ಇವರ ಪ್ರಸ್ತಾವನೆ ಮಾಡುವರು, ಶ್ರೀ ಶ್ರೀಪತಿ ಭಟ್ ಮಾಲಿಕರು ಶ್ರೀ ಧನಲಕ್ಷ್ಮಿ ಲಕ್ಷ್ಮಿ ಕ್ಯಾಶ್ ಇಂಡಸ್ಟ್ರೀಸ್ಇವರು ಪ್ರಶಸ್ತಿ ಪ್ರದಾನ ಮಾಡುವರು ಶ್ರೀ ಭುವನಾಭಿರಾಮ ಉಡುಪ ಸಂಪಾದಕರು ಯುಗಪುರುಷ ಮಾಸಪತ್ರಿಕೆ ಇವರು ಸ್ಮರಣ ಸಂಚಿಕೆಯನ್ನು ಬಿಡುಗಡೆಗೊಳಿಸುವರು. ಮುಖ್ಯ ಅತಿಥಿಗಳಾಗಿ ಶ್ರೀ ಚಂದ್ರಶೇಖರ ಬೆಳ್ಚಡ ಸಸಿಹಿತ್ಲು ಶ್ರೀ ಭಗವತಿ ಕ್ಷೇತ್ರ ಮೊಕ್ತೇಸರರು, ಶ್ರೀ ಸುಂದರ್ ಶೆಟ್ಟಿ ವಿಜಯಾ ಬ್ಯಾಕ್ ನಿ. ಅಧಿಕಾರಿ, ಶ್ರೀಮತಿ ಬಿ. ಸತ್ಯವತಿ ಎಸ್ ಭಟ್ಕೊ ಳಚಪ್ಪು ಹಿರಿಯ ಸಾಹಿತಿಗಳು, ಪಡಂಬೈಲು ಡಾ. ಕೃಷ್ಣಪ್ಪ ಗೌಡ ತಾರಸಿ ಕೃಷಿಕ, ಡಾ. ಕೊಳ್ಚಪ್ಪೆ ಗೋವಿಂದ ಭಟ್ ಹಿರಿಯ ಸಾಹಿತಿ, ಡಾ.ಸತೀಶ ಎನ್.ಬಂಗೇರ ಮುಂಬೈ ಇವರು ಭಾಗವಹಿಸುವರು. ’
Comments (0)
Post Comment
Report Abuse
Be the first to comment using the form below.