(JavaScript required to view this email address)
Mangalore

News & Articles

ಎಲ್ಲ ಸಹೃದಯಿ ಬಂಧುಗಳಿಗೆ ನನ್ನ ಆತ್ಮೀಯ ನಮಸ್ಕಾರಗಳು
ಕಾವ್ಯ ರಸ ಋಷಿಗಳು ಹುಟ್ಟಿ ಬಂದ  ಈ ಪುಣ್ಯ ನೆಲದಲ್ಲಿ ಈ ದಿನದ  ಕವಿಗೋಷ್ಠಿಯ ಅಧ್ಯಕ್ಷ ಸ್ಥಾನವೆಂಬ ಒಂದು ಹಿರಿಯ ಪಟ್ಟಕ್ಕಾಗಿ.. ತುಂಬ ಸಂತೋಷ ಆಗುತ್ತಿದೆ ಸಾಹಿತ್ಯ ಸೇವೆಯನ್ನೇ ಉಸಿರಾಡುತ್ತಿರುವ ಶ್ರೀಯುತ ಪ್ರದೀಪ್ ಕುಮಾರರ ಪ್ರೀತಿ ಗೌರವವೇ ಇದಕ್ಕೆ ಮುಖ್ಯ ಕಾರಣ ಮೊದಲನೆಯದಾಗಿ ನನ್ನದೊಂದು ನಮನವನ್ನು ಅವರಿಗೆ ತಿಳಿಸಲು ಉತ್ಸುಕಳಾಗಿದ್ದೇನೆ. ಹಸಿರುಟ್ಟ ಮಲೆನಾಡ ಸುಂದರ ಪರಿಸರದ ತೊಟ್ಟಲೊಳು ಮಲಗಿ ಹಕ್ಕಿಗಳ ಚಿಲಿಪಿಲಿ ಗಾನದ ಜೋಗುಳವನ್ನೇ ಆಲಿಸುತ್ತಾ ಇಲ್ಲಿಯ ನೀರನ್ನು ಕುಡಿದು ಬೆಳೆದು.. ರಾಷ್ಟ್ರ ಪ್ರಶಸ್ತಿಗಳೊಂದಿಗೆ ಇನ್ನೂ ಅನೇಕ ಪ್ರಶಸ್ತಿಗಳನ್ನು  ತನ್ನ ಮುಡಿಗೇರಿಸಿಕೊಂಡ ಮೇರು ಕನ್ನಡ ಸಾಹಿತಿ ಕುವೆಂಪು ಹಾಗೆಯೇ ಅವರ ಸುಪುತ್ರ ಹಿರಿಯ ಸಾಹಿತಿ ತೇಜಸ್ವಿಯವರ ನೆನಪುಗಳು ಇಲ್ಲಿ ಸದಾ ಹಸಿರು….ಎಲ್ಲಿ ನೋಡಿದರಲ್ಲಿ ಕಂಗೊಳಿಸಿ ಕೈ ಬೀಸಿ ಕರೆಯುತ್ತಿರುವ ಹರಿದ್ವರ್ಣ ಮರಗಳು.! ಬಿರಿದರಳಿದ ಬಗೆ ಬಗೆ ಬಣ್ಣದ ಅದೆಷ್ಟೋ ಹೂವುಗಳು! ಅಚ್ಚರಿತರಿಸುವ ಹಿಂದಿನ ಪಳಯುಳಿಕೆಗಳು! ಒಂದೆ ಎರಡೆ ನೋಡಿದಷ್ಟೂ ಕಣ್ಣಿಗೆ ಸಂಭ್ರಮ ಸಡಗರ ಅವೆಷ್ಟು ಪ್ರಭಾವಿತವಾಗಿದೆಯೆಂದರೆ ನಾಡಿನ ನಾಲ್ಕು ಮೂಲೆಗಳಿಂದಲೂ ಹಿರಿಯ ಕಿರಿಯ ಸಾಹಿತಿಗಳನ್ನೂ ಪ್ರವಾಸಿಗರನ್ನೂ ತನ್ನತ್ತ ಸೆಳೆಯುವ ವಿಶೇಷವಾದ ಶಕ್ತಿ ಈ ಮಣ್ಣಿಗಿದೆ ಎಂದರೂ ವಿಶೇಷವಾಗಲಾರದು..( ಒಂದು ಬೃಹತ್ತಾದ  ಕುಟುಂಬದಂತೆ ಇಂದು ನಾವಿಲ್ಲಿ ಒಗ್ಗೂಡಿದುದೇ ಕಣ್ಮುಂದಿನ  ಸಾಕ್ಷಿ ಈ ಅಗಾಧ ಸಭೆಯನ್ನು ನೋಡಿದಾಗ ಹೃದಯ ತುಂಬಿ ಬರುತ್ತಿದೆ. ) ನಾವೂ ಆಕರ್ಷಿತರಾಗಿ ಮಂಗಳೂರು ಕಡೆಯಿಂದ ನಿನ್ನೆಯೇ ಬಂದವರು.. ಇಲ್ಲೇ ಉಳಕ್ಕೊಂಡಿದ್ದೇವೆ ..ಬಂದವರಿಗೆಲ್ಲಾ ಒಂದು  ಉತ್ತಮ ಆದರಾತಿಥ್ಯ ನೀಡುವ ಇಲ್ಲಿಯ ಕಾರ್ಯ ಕರ್ತರ ವಿಶಾಲ ಹೃದಯಕ್ಕೆ ಒಂದು ನಮನ ಸಲ್ಲಲೇಬೇಕು ಕುವೆಂಪುರವರ ಪ್ರಸಿದ್ಧ ನಾಡಗೀತೆ.ಕನ್ನಡ ಜನನಿಯ ತನುಜಾತೆ ಜಯಹೇ ಕರ್ನಾಟಕ ಮಾತೆ..ನಾಡಿನನಾಲ್ದೆಸೆಯಲ್ಲೂ ಅನವರತ ಮೊಳಗುತ್ತಿದ್ದು,ಮನೆಯಲ್ಲೂ ಶಾಲೆಯಲ್ಲೂ ವಿಜೃಂಭಿಸುತ್ತಿದ್ದು ಇದು ಕನ್ನಡತಾಯಿ ಭುವನೇಶ್ವರಿಯ ಮುಡಿಗೆ ಪ್ರೀತಿಯಿಂದ ಸಂದ ಅನನ್ಯ ಬಳುವಳಿ ನಾವೆಲ್ಲ ಕನ್ನಡಿಗರು ನಮ್ಮ ಮಾತೃ ಭಾಷೆ ಕನ್ನಡವೆಂದು ಹೇಳಲು  ತುಂಬ ಅಭಿಮಾನ ಹೆಮ್ಮೆಯಾಗುತ್ತಿದೆಯಾದರೂ ಇಂದೀಗ ಅದು ಎಲ್ಲೋ ಒಂದುಕಡೆ ನಮ್ಮ ಮಣ್ಣಿನಲ್ಲಿಯೇ  ಸೋಲುತ್ತಿದೆಯೋ ಎಂಬ ಒಂದು ಆತಂಕಕ್ಕಡೆಮಾಡುತ್ತಿದೆ..ಇಂದಿನ ಹೆತ್ತವರೂ ಮಕ್ಕಳೂ ಆಂಗ್ಲಭಾಷೆಯ ಮೋಹಕ್ಕೊಳಗಾಗಿ  ಅದಕ್ಕೇ ಹೆಚ್ಚೆಚ್ಚು ಶರಣಾಗುವುದು ಕಾಣುತ್ತಿದ್ದರೆ ಇದು ಎಲ್ಲಿ ತನಕ ಬಂದು ಮುಟ್ಟುವುದೋ ಎಂಬ ಭೀತಿ ಜಾಸ್ತಿಯಾಗಿದೆ.

ಕವಿ ಶೈಲದ (ಕುಪ್ಪಳಿ) ವೇದಿಕೆಯ ಕವಿಗೋಷ್ಠಿಯ ಅಧ್ಯಕ್ಷೀಯ ಭಾಷಣ
ಹೊರಗಿನ ವ್ಯವಹಾರಕ್ಕೆ ಉದ್ಯೋಗಕ್ಕೆ ಇಂಗ್ಲೀಷ್ ಭಾಷೆ ಬೇಕೇ ಬೇಕು ಅನ್ನುವುದನ್ನು ನಾವು ಒಪ್ಪಿಕೊಳ್ಳುವ. ಹಾಗೇಯೇ ಹಿಂದಿಯೂ ಬೇಕು ಇನ್ನಿತರ ಭಾಷೆಗಳ ಅರಿವಿದ್ದಲ್ಲಿ ಮತ್ತೂ ಚೆನ್ನ ಅನ್ಯ ಭಾಷೆಗಳನ್ನು ನಾವು ಗೌರವಿಸ್ಲೇ ಬೇಕು ಹಾಗೆಯೇ ನಮ್ಮ ಮಾತೃ ಭಾಷೆಯನ್ನು ಕೂಡಾ  ಪ್ರೀತಿಸ್ಲೇ ಬೇಕು ಕನ್ನಡವೆಂದರೆ ನಮ್ಮ ಹೆತ್ತಬ್ಬೆಯ ಹಾಗೆ. ಇಂಗ್ಲಿಷ್ ಭಾಷೆ ಎಂದರೆ ಒಂದು ಆಧುನಿಕದ ಸಂಕೇತವೆಂದು ಕೆಲವರಲ್ಲಿ ತಪ್ಪು ಕಲ್ಪನೆ ಇರುವುದೇ ಈ ಎಡವಟ್ಟಿಗೆ ಕಾರಣ. ಇಂಗ್ಲಿಷ್ ಕಲಿತವರೆಲ್ಲ ಅತಿ ಬುದ್ಧಿವಂತರೂ ಅಲ್ಲ ಕಲಿಯದವರು ಹೆಡ್ಡರೇನು ಅಲ್ಲ .ಇಂಗ್ಲೀಷ್ ತಿಳಿಯದ ನಮ್ಮ ಹಿರಿಯರು ಎಷ್ಟೊಂದು ವ್ಯವಹಾರದಲ್ಲಿ ನಿಪುಣರಾಗಿದ್ದರು.. ಈಗಿನ ಕಾಲಾವಸ್ಥೆಯಲ್ಲಿ ಕನ್ನಡ ಸರಕಾರಿ ಶಾಲೆಗೆ ಹೋಗುವ ಮಕ್ಕಳ ಸಂಖ್ಯೆ ಇಳಿಮುಖವಾಗುತ್ತಾ ಇದ್ದು, ಹೆತ್ತವರು ಕೂಡಾ ಸಾವಿರ ,ಲಕ್ಷಗಟ್ಟಲೆ ಹಣಸುರಿದು ಇಂಗ್ಲೀಷು ಮಾಧ್ಯಮಕ್ಕೆ ಸೇರಿಸುತ್ತಿರುವುದು ಶೋಚನೀಯ ನಮ್ಮ ನೆರೆ ರಾಜ್ಯವಾದ ಕೇರಳದ ಮಲೆಯಾಳಿಗಳು ಅಪ್ಪಟ ಭಾಷಾ ಪ್ರೇಮಿಗಳು ಅವರು ಎಷ್ಟೇ ವಿದ್ಯಾವಂತರಾದರೂ ಯಾವತ್ತೂ ಅವರ ಭಾಷೆ ಬಿಟ್ಟು ಕೊಡುವುದಿಲ್ಲ ಅಲ್ಲಿ ಕನ್ನಡಿಗರು ಕೂಡಾ ಮಲೆಯಾಳವೇ ಮಾತಾಡ್ತಾರೆ  ಫೋನ್ ನಂಬರ್ ಹೇಳುವಾಗ ಒನ್ನ್ ರಂಡ್ ಮೂನ್ನ್ ಅಂತ  ಮಲೆಯಾಳದಲ್ಲಿ ಹೇಳ್ತಾರೆಯೇ ಹೊರತು ನಮ್ಮ ಹಳ್ಳಿ ಹೈದರು..ತರಕಾರಿ ಮಾರುವವರು ಇಂಗ್ಲೀಷಿನ ಗಂಧಗಾಳಿ ಗೊತ್ತಿಲ್ಲದಿದ್ದರೂ ಹೇಳುವ ಹಾಗೆ ವನ್ ಟು ತ್ರಿ ಅಂತ ಇಂಗ್ಲೀಷಲ್ಲಿ ಹೇಳುವುದಿಲ್ಲ  ಯಾಕೆ ಈ ವಿಪರ್ಯಾಸ ..ಕನ್ನಡದಲ್ಲಿ ಉಚ್ಛರಿಸಲು ಅಂಕೆಗಳಿಲ್ಲವೇ.ಹೆತ್ತಬ್ಬೇಯೇ ಮಕ್ಕಳನ್ನು ಅವಗಣಿಸಿದರೆ ಹೇಗೆ. ಇವತ್ತಿನ  ಕವಿಗೋಷ್ಟಿಯಲ್ಲಿ ಅನೇಕ ಕವಿಕೋಗಿಲೆಗಳು ಭಾಗವಹಿಸಿ ಗೋಷ್ಠಿಯನ್ನು ಚಂದಗಾಣಿಸಿ ಕೊಟ್ಟಿದ್ದಾರೆ.ಹೂ ತೋಟದಲ್ಲಿ ಕಂಪೆಸೆಯುತ್ತಿರುವ ವಿವಿಧ ಬಣ್ಣಗಳಿಂದ ಅರಳಿದ ಹೂಗಳಂತೆ . ಸೇವಂತಿಗೆ ಮಲ್ಲಿಗೆ ಜಾಜಿ ಗುಲಾಬಿ ಎಷ್ಟೊಂದು ವೈವಿಧ್ಯಗಳು..ಅದಕ್ಕದುವೇ ಸಾಟಿ ಎಂಬಂತೆ ಇಲ್ಲಿ ಪ್ರತಿಯೋರ್ವ ಕವಿಯ ಕವನಗಳು ಪೈಪೋಟಿಯಲ್ಲಿದ್ದಂತೆ ಒಂದಕ್ಕೊಂದು ಮಿಗಿಲು! 

ಕವಿ ಶೈಲದ (ಕುಪ್ಪಳಿ) ವೇದಿಕೆಯ ಕವಿಗೋಷ್ಠಿಯ ಅಧ್ಯಕ್ಷೀಯ ಭಾಷಣ
ಕೆಲವು ಕವನಗಳ ಆಂತರ್ಯ ಭಾವಗಳು  ಬಹಳ ಎತ್ತರಕ್ಕೇರಿದರೆ ಇನ್ನು ಕೆಲವರದ್ದು ಇನ್ನೂ ಸ್ವಲ್ಪ ಪ್ರಯತ್ನ ಬೇಕಾಗಿತ್ತೇನೋ  ಅಂತ ಅನಿಸಿತ್ತು. ಕಳಪೆಯಂತು ಯಾರದ್ದೂ ಅಲ್ಲ ಎಲ್ಲ ಗಟ್ಟಿ ಕಾಳುಗಳೆ ಕವನ ಬರೆಯುವುದೆಂದರೆ ಅದು ಸುಲಭದ ಕೆಲಸವಲ್ಲ  ಮನಸ್ಸಿನಾಳದ ಕನಸುಗಳನ್ನು ಕಲ್ಪನೆಗಳನ್ನು ಭಾವಗಳನ್ನು ಹೊರಚೆಲ್ಲಿ ಅಕ್ಷರರೂಪಕ್ಕಿಳಿಸಬೇಕಾದರೆ ಅದೊಂದು ತಪದಂತೆ ..ಆ ಸರಸ್ವತಿ ಮಾತೆ ಒಲಿಯಬೇಕು ಅವಳ ಅನುಗ್ರಹ ಸಿದ್ಧಿಸಬೇಕು.


ಕವಿ ಶೈಲದ (ಕುಪ್ಪಳಿ) ವೇದಿಕೆಯ ಕವಿಗೋಷ್ಠಿಯ ಅಧ್ಯಕ್ಷೀಯ ಭಾಷಣ
 ರವಿ ಕಾಣದ್ದನ್ನು ಕವಿ ಕಾಣ್ತಾನೆ ಅನ್ನುವಂತೆ ಅಂತರಾಳದ ಭಾವನೆಗಳ ಒಳಹೊಕ್ಕು ಒಂದೊಂದೇ ಎಳೆಗಳನ್ನು  ಹೊರಗೆಳೆದು ಅದಕ್ಕೊಂದು ರೂಪುಕೊಟ್ಟು,ಅವರವರ ದೃಷ್ಟಿಕೋನದ ನೇರಕ್ಕೆ ಸರಿಯಾಗಿ  ಬರೆಯುವ  ಆ ಕೌಶಲ ಕವಿಗಳಿಗಿರುವ ಸ್ವಾತಂತ್ರ್ಯದ ಹಕ್ಕು ಕವನಗಳಲ್ಲಿ ಅನೇಕ ಪ್ರಕಾರಗಳಿವೆ ಸಾಹಿತ್ಯವೆನ್ನುವುದು  ಆಕಾಶದಂತೆ ಅನಂತ ಅದರ ಉದ್ದಗಲ ಅಳತೆಗೆ ಸಿಗದಿರುವಂಥಾದ್ದು ಈಗೀಗ ಅನ್ಯ ದೇಶದ  ಗಝಲ್ ರುಬಾಯಿ ಹಾಯ್ಕು ಟಂಕಾ ಮೊದಲಾದ ಪ್ರಕಾರಗಳು ನಮ್ಮಲ್ಲಿಯೂ ಸಾಕಷ್ಟು ಸದ್ದು ಮಾಡುತ್ತಿವೆ ಭಾಗವಹಿಸಿದ ಎಲ್ಲ ಕವಿಮನದವರಿಗೆ ನನ್ನ ಕಡೆಯಿಂದ ಅಭಿನಂದನೆ ಸಲ್ಲಿಸುತ್ತಾ ದೇವರ ಅನುಗ್ರಹ ಅವರೆಲ್ಲರ ಮೇಲಿರಲಿ ಉತ್ತರೋತ್ತರವಾಗಿ ಯಶಸ್ಸು ಕಾಣುವಂತಾಗಲಿ ಎಂದು ಆಶಿಸುತ್ತಾ ಇನ್ನೊಮ್ಮೆ ಎಲ್ಲರಿಗೂ ನನ್ನ ಆತ್ಮೀಯ ನಮಸ್ಕಾರಗಳು ..ಈ ಒಂದು ಅವಕಾಶಕ್ಕಾಗಿ ಅನಂತ ಧನ್ಯವಾದಗಳು
ಕವಿ ಶೈಲದ (ಕುಪ್ಪಳಿ) ವೇದಿಕೆಯ ಕವಿಗೋಷ್ಠಿಯ ಅಧ್ಯಕ್ಷೀಯ ಭಾಷಣ
ಬಿ ಸತ್ಯವತಿ ಭಟ್ ಕೊಳಚಪ್ಪು
ಕವಿ ಶೈಲದ (ಕುಪ್ಪಳಿ) ವೇದಿಕೆಯ ಕವಿಗೋಷ್ಠಿಯ ಅಧ್ಯಕ್ಷೀಯ ಭಾಷಣ
ಕವಿ ಶೈಲದ (ಕುಪ್ಪಳಿ) ವೇದಿಕೆಯ ಕವಿಗೋಷ್ಠಿಯ ಅಧ್ಯಕ್ಷೀಯ ಭಾಷಣ

Comments (0)




Be the first to comment using the form below.